WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » » » » ಮ್ಯಾನ್ಮಾರ್‌ನಲ್ಲಿ ರಕ್ತಪಾತ: 114 ಮಂದಿ ನಾಗರಿಕರನ್ನು ಗುಂಡು ಹಾರಿಸಿ ಕೊಂದು ಹಾಕಿದ ಸೇನಾ ಪಡೆ!

ಮ್ಯಾನ್ಮಾರ್: ಸೇನಾ ದಂಗೆಯಿಂದ ಕಳೆದ ಕೆಲವು ತಿಂಗಳಿನಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಮ್ಯಾನ್ಮಾರ್‌ನಲ್ಲಿ ಇದೀಗ ಮತ್ತೆ ರಕ್ತಪಾತವಾಗಿದೆ. ಹೌದು, ಸೇನಾ ದಂಗೆಯನ್ನು ವಿರೋಧಿಸಿ ಅಲ್ಲಿನ ಜನರು ಶಾಂತಿಯು ನಡೆಸುತ್ತಿದ್ದಾರೆ. ಈ ಪ್ರತಿಭಟನೆಯನ್ನು ಖಂಡಿಸಿ ಜುಂಟಾ ಮಿಲಿಟರಿ ಪಡೆ 114ಕ್ಕೂ ಹೆಚ್ಚು ನಾಗರಿಕರನ್ನು ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಿದೆ. ಹೌದು, ದೇಶದ ಹಲವೆಡೆ ಅಂದರೆ ಶನಿವಾರ ದೇಶದ 44 ಪಟ್ಟಣ ಮತ್ತು ನಗರಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭನೆಯನ್ನು ವಿರೋಧಿಸುತ್ತಿರುವ ದಂಗೆ ಎದ್ದಿರುವ ಸೇನಾ ಪಡೆಗಳು ಪ್ರತಿಭಟನಾಕಾರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ 114ಕ್ಕೂ ಹೆಚ್ಚು 44 ನಗರಗಳಲ್ಲಿ ಸಾವನಪ್ಪಿದ್ದಾರೆ. ಇನ್ನು ಹತ್ಯೆಗೊಂಡವರಲ್ಲಿ 13 ವರ್ಷದ ಬಾಲಕಿ ಕೂಡ ಸೇರಿದ್ದಾಳೆ. ಮೈಕ್ತಿಲಾ ಎಂಬ ಪ್ರದೇಶದಲ್ಲಿ ತನ್ನ ಮನೆಯಲ್ಲಿರುವ ಸಂದರ್ಭದಲ್ಲಿ ಜುಂಟಾ ಸೇನಾ ಪಡೆ ಹಾರಿಸಿದ ಗುಂಡಿನ ದಾಳಿಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ. ಇದರ ಹೊರತಾಗಿ ಪ್ರತಿಭಟನಾಕಾರರು ಫೆಬ್ರವರಿ 1ರ ಸೇನಾದಂಗೆ ವಿರೋಧಿಸಿ ಯಾಂಗೌನ್, ಮಂಡಲೆ ಮತ್ತು ಇತರ ಪಟ್ಟಣಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಘಟನೆ ಹಿನ್ನೆಲೆ ಏನು? ಕ್ಷಿಪ್ರಕ್ರಾಂತಿ ನಡೆಸಿ ಸರಕಾರವನ್ನು ತನ್ನ ಹಿಡಿತಕ್ಕೆ ಪಡೆದಿರುವ ಸೇನೆ, ರಾಷ್ಟ್ರೀಯ ನಾಯಕಿ ಆಂಗ್‌ ಸನ್‌ ಸೂಕಿ ಸೇರಿ ಅನೇಕ ಆಡಳಿತ ಪಕ್ಷದ ನಾಯಕರನ್ನು ಗೃಹಬಂಧನದಲ್ಲಿ ಇರಿಸಿದೆ. ಅಲ್ಲದೆ ಮಿಲಿಟರಿ ಅಧಿಕಾರಿಗಳೇ ಅಲ್ಲಿನ ಸರಕಾರವನ್ನು ನಡೆಸುತ್ತಿದೆ. ಇದನ್ನು ವಿರೋಧಿಸಿ ನಾಗರಿಕರು ಪ್ರತಿಭಟಿಸುತ್ತಿದ್ದಾರೆ. ಅಮೆರಿಕ ಕೂಡ ಮಿಲಿಟರಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿರುವ ಮಧ್ಯೆಯೇ ರಕ್ತಪಾತ ನಡೆದಿದೆ.


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/3rpvpwF
via IFTTT

«
Next
Newer Post
»
Previous
Older Post

No comments: