WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

ಕನ್ನಡ ಸಾಹಿತ್ಯ ಸಮ್ಮೇಳನ -29 Feb TO 1st March



ಕನ್ನಡ ಸಾಹಿತ್ಯ ಸಮ್ಮೇಳನ

29-Feb-2020 TO 01-Mar-2020
ರಂಗಮಂದಿರ್ ಬೀದರ.

1. ಚಿತ್ರಕಲೆ
2. ಮೋದಿ ಜಾಕೆಟ್
3. ಖಾದಿ ಉಡುಪುಗಳು
4. ಮುತ್ತು ಹಾರ
5. ಸಾಹಿತ್ಯ ಪುಸ್ತಕಗಳು

ನಿಮಗೆ ಆಸಕ್ತಿ ಇದ್ದರೆ ಶಾಪಿಂಗ್ ಮಾಡಿ ಮತ್ತು ವಸ್ತುಗಳನ್ನು ಖರೀದಿಸಿ .....

Health Tips

Health Tips



ಒಂದು ಆರ್ಡಿನರಿ ಲವ್‌ಸ್ಟೋರಿ

– ಬೇಳೂರು ಸುದರ್ಶನ




ಸೀಟಿಲ್ವಾ ಎಂದು ಆವಳು ನನ್ನ ಕೇಳುವ ಹೊತ್ತಿಗಾಗಲೇ ನಾನು ಆ ಬಸ್ಸಿನ ಡ್ರೈವರ್ ಬಾಗಿಲಿನ ಮೂಲಕ ಒಳಗೆ ಬಂದು ಇಂಜಿನ್ ಬಳಿ ಇದ್ದ ಖಾಲಿ ಸೀಟಿನಲ್ಲಿ ಬ್ಯಾಗು ಬಿಸಾಕಿದ್ದೆ. ಬಳ್ಳಾರಿಯ ಆ ತಣ್ಣನೆ ರಾತ್ರಿಯಲ್ಲಿ ಜನ ಪುತುಪುತು ಬಸ್ಸಿನೊಳಗೆ ಹೊರಗೆ ಅಡ್ಡಾಡುತ್ತ ಗಾಳಿಯನ್ನು ಬಿಸಿ ಮಾಡುತ್ತಿದ್ದರು. ಇಲ್ಲಿ ಅವಳು ತನ್ನೊಳಗೇ ಏನೋ ಯೋಚಿಸುತ್ತ ವಿಮನಸ್ಕಳಾಗಿ ನಿಂತಿದ್ದಳು. ನಾನು ಅವಳ ಕೈ ಹಿಡಿದು ಒಳಗೆ ಎಳೆದುಕೊಂಡೆ. ಇಡೀ ದಿನ ಅತ್ತು ಅತ್ತು ಅವಳ ಕಣ್ಣುಗಳು ಊದಿಕೊಂಡಿದ್ದರೂ ಎಷ್ಟೆಲ್ಲ ಛಂದ ಇದ್ದಾಳಲ್ಲ ಎಂದೆನ್ನಿಸಿ ನನಗೆ ಅವಳನ್ನು ಅಲ್ಲೇ ಭುಜಕ್ಕೆ ಒರಗಿಸಿಕೊಳ್ಳಬೇಕು ಎನಿಸಿತು. ಆದರೆ ಕೊಳಕು ಕಾಡ್ರಾ ಧರಿಸಿ ಅಂಡಲೆಯುವ ನಾನು ಯಾರು, ಡಿಗ್ರಿ ಮುಗಿಸಿ ಇಲ್ಲಿ ಅವನನ್ನು ಪ್ರೀತಿಸುತ್ತ ಇರೋ ಅವಳೆಲ್ಲಿ …..
ಬೆಳಗಿನಿಂದ ಲಾಡ್ಜಿನಲ್ಲಿ ನಡೆದ ಎಲ್ಲ ಮಾತುಕತೆಯಲ್ಲೂ ಅವಳ ಅಳುವೇ ಮುಖ್ಯವಾಗಿ ಕೇಳಿಸುತ್ತಿತ್ತು ಎಂದು ನನ್ನ ಮಿತ್ರನೆಂಬೋ ಮನುಷ್ಯ ಹೇಳಿದ್ದ. ಇಲ್ಲಿ ಅವಳ ಕಣ್ಣುಗಳನ್ನು ನೋಡಿದ ಮೇಲೆ ಅವನ ಮಾತುಗಳನ್ನು ನಾನು ನಿಜವೆಂದೇ ತಿಳಿಬೇಕಿದೆ. ಮದುವೆಯಾಗಲು ಆತ ಒಪ್ಪಲಿಲ್ಲ ಎಂದು ಅವಳು ಮಾತೇ ಆಡದೆ ಸುಮ್ಮನೆ ಅಳುತ್ತ ಕೂತಿದ್ದಳಂತೆ. ಇಲ್ಲಿ ನೋಡಿದರೆ ನನ್ನ ಜತೆ ಬೆಂಗಳೂರಿಗೆ ಹೊರಟಿದ್ದಾಳೆ. ಅವಳನ್ನು ನನ್ನ ಜೊತೆ ಕಳಿಸುತ್ತಿರೋ ವ್ಯಕ್ತಿಗಳಿಗೆ ನನ್ನ ವಿಷಮನಸ್ಸು ಗೊತ್ತಿಲ್ಲ.
ಅವಳೀಗ ಅಲ್ಲಿಯೇ ಶಾಲು ಹಾಸಿ ಮಲಗಿದ್ದಾಳೆ. ಮೂರು ಸೀಟು ಹಾಗೂ ಇಂಜಿನ್ನಿನ ನಡುವೆ ನಾವು ಆರೇಳು ಗಂಟೆಗಳನ್ನು ಕಳೆಯಬೇಕು. ಅವಳು ಎಲ್ಲೂ ತಪ್ಪಿಸಿಕೊಳ್ಳದಂತೆ ನಾನು ನೋಡಿಕೊಳ್ಳಬೇಕು. ಇಂಥ ಸನ್ನಿವೇಶದಲ್ಲಿ ಅವಳನ್ನು ನಾನು ಮುಟ್ಟಬಹುದೆ ಎಂದು ಯಾರನ್ನೂ ಕೇಳಲಾಗಲಿಲ್ಲ. ಹೊರಗೆ ಕಂಡಕ್ಟರ್ ಸೀಟಿ ಊದಿದ್ದಾನೆ. ಮತ್ತೆ ಜನ ಎಲ್ಲಿಂದಲೋ ಬಂದು ತುಂಬಿಕೊಂಡಿದ್ದಾರೆ. ನಮ್ಮ ಸುತ್ತಲೂ ಗೋಣಿಚೀಲಗಳಿವೆ; ಬಾಕ್ಸುಗಳಿವೆ. ಹೂವುಗಳಿವೆ; ಹಣ್ಣುಗಳ ಬುಟ್ಟಿಗಳಿವೆ.
ನಾವು ಯಾವತ್ತೂ ಹೀಗೆ ಒಟ್ಟಿಗೆ ಕುಳಿತವರೂ ಅಲ್ಲ. ಈಗ ಮಾತ್ರ ಒಟ್ಟಿಗೆ ಮಲಗಿ ಬೆಂಗಳೂರಿಗೆ ಹೋಗುತ್ತಿದ್ದೇವೆ. ನಾವು ಚಳ್ಳಕೆರೆಯಲ್ಲಿ ಚಾ ಕುಡಿಯಲು ಇಳಿಯುವುದಿಲ್ಲ. ಅಥವಾ ಚುಮುಚುಮು ನಸುಕಿನಲ್ಲಿ ತುಮಕೂರಿನಲ್ಲೂ ಇಳಿಯುವುದಿಲ್ಲ. ನಮಗೆ ಸೀದಾ ಬೆಂಗಳೂರಿಗೆ ಹೋಗಬೇಕು. ಅವಳನ್ನು ನಾನು ಹಾಸ್ಟೆಲಿಗೆ ಸೇರಿಸಬೇಕು. ಅವಳನ್ನು ವಾರಕ್ಕೊಮ್ಮೆ ನೋಡಿಕೊಳ್ಳಬೇಕು. ಅವಳು ಡಿಪ್ರೆಸ್ ಆಗಬಾರದು ಎಂದು ಡಾಕ್ಟರ್ ಹೇಳಿದ್ದಾರೆ.
ಸುಟ್ಟುಹೋದ ಅವಳ ಪ್ರೀತಿಯನ್ನು ಮತ್ತೆ ಅರಳಿಸಲು ಯಾರಾದರೂ ಬರಬಹುದು ಎಂದು ಕಾಯಬೇಕು.
ಬಳ್ಳಾರಿಯನ್ನು ದಾಟಿದ ಮೇಲೆ ಬಸ್ಸು ರೈಲಿ ಹಳಿಗುಂಟ ಹೋಗುತ್ತದೆ. ಬದುಕೇ ಹೀಗೆ ಒಂದು ಉದ್ದನೆಯ ಸರಳರೇಖೆ ಎಂದು ನಾವೆಲ್ಲ ಭಾವಿಸುವಂತೆ ಮಾಡುತ್ತದೆ. ಆಮೇಲೆ ಒಂಟಿ ಹೆದ್ದಾರಿಯಲ್ಲಿ ಚಳ್ಳಕೆರೆ, ಹಿರಿಯೂರು. ಆಮೇಲೆ ಜೋಡಿ ಹೆದ್ದಾರಿಯಲ್ಲಿ ಬೆಂಗಳೂರು. ಯಾವುದಿದ್ದರೂ ಇವಳ ಕಥೆ ಹೀಗಾಯಿತಲ್ಲ ಎಂದು ನನಗೆ ತೀರ ಬೇಸರವಾಗಿ ಎದ್ದು ಕೂತೆ. ಎಲ್ಲರೂ ಕಿಟಕಿಯನ್ನು ತೆರೆದು ಗಾಳಿಗೆ ಮುಖವೊಡ್ಡಿ ಮಲಗುವ ಹತಾಶ ಯತ್ನದಲ್ಲಿದ್ದರು. ಇವಳು ಇಲ್ಲಿ ವೇಲ್‌ನ್ನೇ ಹೊದ್ದು ಮಲಗಿದ್ದಾಳೆ. ಒಮ್ಮೊಮ್ಮೆ ಎದ್ದು ಕೂರುತ್ತಾಳೆ. ಬಿಕ್ಕುತ್ತಾಳೆ. ನಾನು ಅವಳ ಭುಜ ತಟ್ಟಿ ಮಲಗಿಸುತ್ತೇನೆ. ಡ್ರೈವರ್‌ಗೆ ನಮ್ಮ ಬಗ್ಗೆ ಅಂತದ್ದೇನೂ ಅನ್ನಿಸಿಲ್ಲ ಎಂದು ನನಗೆ ಸಮಾಧಾನ. ಎದುರು ವಾಹನಗಳ ಬೆಳಕಿನಿಂದ ಮತ್ತೆ ಮತ್ತೆ ನಾವು ಬೆಳಗುತ್ತಿದ್ದೇವೆ. ಹಾರ್ನ್ ಹೊಡೆತಕ್ಕೆ ನಾವು ಮಂಪರಿನಿಂದ ಮೇಲೆದ್ದು ತತ್ತರಿಸುತ್ತೇವೆ. ನಾವು ಬಳ್ಳಾರಿ ಬಿಟ್ಟಿದ್ದೇ ಹನ್ನೊಂದು ದಾಟಿದ ಮೇಲೆ. ಈಗ ನಮಗೆ ನಿದ್ದೆಯೂ ಬರದೆ, ಮಲಗದೇ ಇರಲಾಗದೆ ಚಡಪಡಿಕೆ ಶುರುವಾಗಿದೆ.
ಯಾವಾಗಲೋ ನಾನು ನಿದ್ದೆಗೆ ಜಾರಿದ್ದೆ. ಅವಳು ಛಕ್ಕನೆ ನನ್ನ ಕೈ ಹಿಡಿದು `ಪ್ಲೀಸ್, ನನ್ನ ಕಥೆ ಮುಂದೇನಾಗುತ್ತೆ ಹೇಳು’ ಎಂದಾಗ ನಾನು ಅರೆಕ್ಷಣ ಬೆಚ್ಚಿದೆ.ಅವಳಾಗಲೀ, ನಾನಾಗಲೀ ಹಿಂದೆಂದೂ ಮುಟ್ಟಿಸಿಕೊಳ್ಳದವರು. ಈಗ ಅವಳನ್ನು ಕೈಹಿಡಿದು ಬಸ್ಸಿಗೆ ಹತ್ತಿಸಿದ್ದಷ್ಟೆ; ಇಲ್ಲಿ ಇವಳು ನನಗೆ ಆತುಕೊಂಡು ಮಲಗಿದ್ದಾಳೆ. ಅವಳಿಗೂ, ನನಗೂ ಈ ಸ್ಪರ್ಶ ಹೊಸತು.
`ನೋಡು, ಸುಮ್ನೆ ಸಿದ್ದೆ ಮಾಡು. ಬೆಂಗಳೂರು ಬಂದಮೇಲೆ ಮಾತಾಡೋಣ’ ಎಂದೆ. ಅವಳು ಬಿಡಲಿಲ್ಲ. ನನ್ನ ಕೈ ಹಿಡಿದೆಳೆದಳು. ನನ್ನ ಭುಜ ಹಿಡಿದು ಅಲ್ಲಾಡಿಸಿದಳು. ಮತ್ತೆ ಅವಳ ಕಣ್ಣಿನಲ್ಲಿ ನೀರಿದೆಯೇನೋ, ಕತ್ತಲಿನಲ್ಲಿ ಗೊತ್ತಾಗದೆ ನಾನು ತಡವರಿಸಿದೆ.
ನಾಳೆ ಅವಳೇನಾಗುತ್ತಾಳೆ ಎಂದು ನನಗೆ ಗೊತ್ತಿಲ್ಲ ಎಂದು ಅವಳಿಗೆ ಹೇಳಲೆ? ನಾಳೆ ನಾನೇನಾಗುತ್ತೇನೆ ಎಂದು ನನಗೆ ಗೊತ್ತಿದೆಯೆ?
ನಾನು ಮೈಸೂರು ಬ್ಯಾಂಕ್ ಸರ್ಕಲ್ಲಿನಲ್ಲಿ ನಿದ್ದೆ ಮಾಡಿದರೂ ಮಾಡಿದೆ; ಹೆಬ್ಬಾಳದಿಂದ ಮೆಜೆಸ್ಟಿಕ್ಕಿಗೆ ನಡೆದುಕೊಂಡು ಬಂದರೂ ಬಂದೆ. ಬನಶಂಕರಿಯಿಂದ ಟಿಕೆಟ್ ಇಲ್ಲದೇ ಕಮಲಾನಗರಕ್ಕೆ ಹೋದರೂ ಹೋದೆ. ವಿಜಯಲಕ್ಷ್ಮಿ ಥಿಯೇಟರಿನಲ್ಲಿ ೪.೮೦ಕ್ಕೆ ಟಿಕೆಟ್ ಖರೀದಿಸಿ ಒಂದು ಅರೆಸೆಕ್ಸಿ ಇಂಗ್ಲಿಶ್ ಸಿನೆಮಾ ನೋಡಿದರೂ ನೋಡಿದೆ. ನಾನು ಮತ್ತೊಂದು ಕಾಡ್ರಾ ಪ್ಯಾಂಟ್ ಖರೀದಿಸಿದರೂ ಖರೀದಿಸಿದೆ. ನಾನು ಗಾಂಧಿ ಬಜಾರಿನ ಟಿವಿ ಸೇಲ್ಸ್‌ಮನ್ ಕೆಲಸ ಬಿಟ್ಟರೂ ಬಿಟ್ಟೆ…. ನಾನು ಏನಾಗುತ್ತೇನೆ, ಬೆಂಗಳೂರಿಗೆ ಹೋದಮೇಲೆ ಕಾಟನ್‌ಪೇಟೆಗೆ ಹೋಗುತ್ತೇನೋ ಅಥವಾ ಮತ್ತಾವುದೋ ಕಾರ್ಖಾನೆಗೆ ಸೇರಿಕೊಳ್ಳುತ್ತೇನೋ ಅನ್ನೋದೇ ಗೊತ್ತಿಲ್ಲದೆ ಇವಳ ಭವಿಷ್ಯವನ್ನು ಹೇಗೆ ಊಹಿಸಲಿ……
ಅವಳ ಆ ಪುಟ್ಟ ಕಣ್ಣುಗಳನ್ನೇ ಮಿಂಚಿಹೋಗುವ ಬೆಳಕಿನಲ್ಲಿ ನೋಡತೊಡಗಿದೆ. ಅವಳ ವೇಲ್ ಸರಿದು ಮುಖ ಬತ್ತಲಾಗಿತ್ತು. ನಮ್ಮನ್ನು ಆದಷ್ಟೂ ಬೇಗೆ ಬೆಂಗಳೂರಿನಲ್ಲಿ ಎಸೆಯಬೇಕೆಂದು ಡ್ರೈವರ್ ನಿರ್ಧರಿಸಿದ ಹಾಗೆ ಬಸ್ಸು ವೇಗ ಪಡೆದಿತ್ತು. ಜಂಪ್‌ಗಳಿಗೆ ನಾವು ಅತ್ತಿತ್ತ ತೊನೆಯುತ್ತಿದ್ದೆವು. ಅವಳು ಮತ್ತೆ ಮತ್ತೆ ನನಗೆ ಡಿಕ್ಕಿಯಾಗುತ್ತಿದ್ದಳು. ಅವಳ ಮುಖವನ್ನು ಅಷ್ಟು ಹತ್ತಿರದಿಂದ ನಾನು ಮತ್ತೆ ನೋಡಲಾರೆ ಅನ್ನಿಸಿತು.
ಅವ ಮದುವೆಯಾಗುವುದಿಲ್ಲ ಎಂದು ಗೊತ್ತಿದ್ದೂ ಆಕೆ ಯಾಕೆ ಇಲ್ಲಿಗೆ ಬಂದಳು, ಯಾಕೆ ಮಾತುಕತೆ ನಡೆಸಿದಳು, ಯಾಕೆ ಮತ್ತೆ ಕುಸಿದುಹೋದಳು ಎಂದು ನನಗೆ ಗೊತ್ತಾಗಲಾರದು. ಈ ರಾತ್ರಿ, ನಾಳೆಯ ಬೆಳಗು ಕಳೆದ ಮೇಲೆ ಅವಳು ಸಿಗಬೇಕೆಂದೇನೂ ಇಲ್ಲವಲ್ಲ….. ಆಕೆಯನ್ನು ಸಂಜೆ ಲಾಡ್ಜಿನಲ್ಲಿ ನೋಡಿದಾಗ ಅವಳು ಇಷ್ಟೆಲ್ಲ ಭಾವಜೀವಿ ಎನ್ನಿಸಿರಲಿಲ್ಲ. ಸುಮ್ಮನೆ ಎಲ್ಲೋ ನೋಡುತ್ತ ಕೂತಿದ್ದಳು. ಎಲ್ಲರೂ ಕಾಫಿ ಕುಡಿಯುತ್ತಿದ್ದರೆ ಈಕೆ ಮಂಡಿಗಳನ್ನು ಕೈಗಳಿಂದ ಸುತ್ತುವರಿದು ವಿರಕ್ತೆಯ ಹಾಗೆ ಕೂತಿದ್ದಳು. ಎಲ್ಲರೂ ಅಲ್ಲಿ ಯಾವುದೋ ಸಿನೆಮಾದ ಯಾವುದೋ ಸನ್ನಿವೇಶದ ಬಗ್ಗೆ ಚರ್ಚಿಸುತ್ತಿದ್ದರೆ ಇವಳು ಮಾತ್ರ ಸೋತುಹೋದ ನಾಯಕಿಯ ಹಾಗೆ ವಿಷಣ್ಣವಾಗಿ ನಗುತ್ತಿದ್ದಳು. ಎಲ್ಲರೂ ಊಟಕ್ಕೆ ಹೋದಾಗಲೇ ನನಗೆ ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದು ಗೊತ್ತಾಗಿದ್ದು.
ನಾನು ಅವಳ ಅಂಗೈಯನ್ನು ಮೆಲ್ಲಗೆ ಒತ್ತಿದೆ. ಅವಳ ತೋಳುಗಳನ್ನು ಗಟ್ಟಿಯಾಗಿ ಹಿಡಿದೆ. ಅವಳ ವೇಲ್ ಸರಿಪಡಿಸಿ ಕಿವಿ ಮುಚ್ಚಿದೆ. ಅವಳ ಕೆನ್ನೆ ತಟ್ಟಿದೆ. ಅವಳು ಯಾಕೋ ಪುಟ್ಟ ಮಗುವಿನ ಹಾಗೆ ಮುರುಟಿಕೊಂಡಿದ್ದಾಳೆ. ಬಹುಶಃ ನಾಳೆ ಏನಾದರೂ ಆಗಬಹುದೆ? ನಾನು ಅವಳಿಂದ ಬಿಡುಗಡೆ ಪಡೆಯಲಾರೆನೆ?
`ನೀನು ಜೊತೆಗೆ ಬರ್‍ತೀಯ ಅಂದಮೇಲೆ ಸ್ವಲ್ಪ ಸಮಾಧಾನ ಆಯ್ತು ಕಣೋ’ ಅವಳಿಗೆ ನಿದ್ದೆ ಬಂದಿಲ್ಲ.
ನಾನು ಅವತ್ತು ಬೆಂಗಳೂರಿಗೆ ವಾಪಸಾಗಬೇಕು ಅನ್ನೋ ನಿಯಮವೇನೂ ಇರಲಿಲ್ಲ. ನನಗೆ ಕೆಲಸವೇ ಇರಲಿಲ್ಲ. ಹಾಗಂತ ನಾನು ಅವಳಿಗೆ ಹೇಳಲಾರೆ. ನಾನೀಗ ಮಹಾನ್ ಸಾಮಾಜಿಕ ಕಾರ್ಯಕರ್ತ. ವಿದ್ಯಾರ್ಥಿ ಚಳವಳಿಯಲ್ಲಿ ನಾನೊಬ್ಬ ಮುಖ್ಯ ವ್ಯಕ್ತಿ. ನ್ಯಾಶನಲ್ ಕಾಲೇಜಿನ ಎತ್ತರದ ಗೋಡೆಗಳ ಮೇಲೆ, ರೈಲ್ವೆ ನಿಲ್ದಾಣದ ಉದ್ದುದ್ದ ಕಟ್ಟೆಯ ಮೇಲೆ, ಜೈಲ್,ರೇಸ್‌ಕೋರ್ಸ್ ರಸ್ತೆಗಳಲ್ಲಿ ನಾನು ಬರೆದ ಗೋಡೆಬರಹಗಳನ್ನು ಈಗಲೂ ಮಸುಕಾಗಿ ಕಾಣಬಹುದು. ಚಳವಳಿಗಳಲ್ಲಿ ಪ್ಲಕಾರ್ಡ್ ಬರೆದಿದ್ದೇನೆ. ವರದಕ್ಷಿಣೆ ಸಾವಿನ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ನನ್ನ ಕವನವನ್ನು ಯಾರೋ ಮಹರಾಯ್ತಿ ಓದಿದ್ದಾಳೆ.
`ನೀನು ಚಾಮರಾಜಪೇಟೇಲೇ ಇರ್‍ತೀಯ?’
`ಹೌದು.’
`ಹಾಗಾದ್ರೆ ಅವಾಗಾವಾಗ ನೀನು ನನ್ನ ಹಾಸ್ಟೆಲಿಗೆ ಬರಬಹುದು.’
ನಾನು ಅವಳ ತೋಳು ಹಿಡಿದೇ ಹೇಳಿದೆ: `ಬರ್‍ತೀನಿ. ಕನಿಷ್ಟ ವಾರಕ್ಕೊಂದ್ಸಲ ಬಂದೇ ಬರ್‍ತೀನಿ.’
ನಾವು ಹಾಗೇ ಮಲಗಿದ್ದೇವೆ. ಬಸ್ಸು ಭರಭರ ಹೋಗ್ತಾ ಇದೆ. ಲಾರಿಗಳು ನಮ್ಮೆದುರು, ಹಿಂದೆ, ಮುಂದೆ ಬಂದು ಹೋಗುತ್ತಿವೆ. ನಾವು ಬಸ್ಸಿನ ರೊಯ್ಯರೊಯ್ಯ ಸದ್ದನ್ನೇ ಕೇಳುತ್ತ ಮಲಗಿದ್ದೇವೆ. ನಾವು ಚಳಿಗಾಗಲೀ, ಶಬ್ದಕ್ಕಾಗಲೀ, ನಮ್ಮನ್ನು ಆಗಾಗ ದಿಟ್ಟಿಸುವ ಡ್ರೈವರನಿಗಾಗಲೀ ಹೆದರಿಲ್ಲ.
ಅವಳನ್ನು ಸೆಳೆದು ನಾನು ಮಾತನಾಡೋದಕ್ಕೆ ಶುರು ಮಾಡ್ದೆ. ಅವಳ ಜತೆ ಮಾತನಾಡದೇ ಹೀಗೆ ಇರೋದು ಸರಿಯಲ್ಲ ಅನ್ನಿಸತೊಡಗಿತ್ತು.
`ನೋಡು, ನೀನು ಅವನ ಬಗ್ಗೇನೇ ಯೋಚಿಸ್ಬೇಡ ಮಾರಾಯ್ತಿ. ಸುಮ್ನೆ ಬೆಂಗಳೂರಿನಲ್ಲಿ ನಿನ್ನ ಕೆಲಸ ಮಾಡ್ಕೋತಾ ಇರು. ನಾವು ಹೀಗೆ ನೋವು ಅನುಭವಿಸ್ತಾನೇ ಎಷ್ಟು ದಿನಾ ಅಂತ ಇರೋಕ್ಕಾಗುತ್ತೆ… ನಾನು ಪ್ರೀತಿಸ್ತಾ ಇರೋ ಹುಡುಗಿ ಇವತ್ತಿಗೂ ನನಗೆ ಕಾಗದ ಬರೆದಿಲ್ಲ. ಅವಳು ನಿಜಕ್ಕೂ ನನ್ನ ಪ್ರೀತಿಸ್ತಿದಾಳೋ ಇಲ್ವೋ ಅನ್ನೋದೇ ನನಗೆ ಗೊತ್ತಿಲ್ಲ. ನಾನೂ ನಿಂಥರಾನೇ ನೊಂದಿದೇನೆ. ನನಗೆ ಒಂದು ಒಳ್ಳೆ ಕೆಲಸ ಅನ್ನೋದಿಲ್ಲ. ಸೋಶಿಯಲ್ ವರ್ಕ್ ಮಾಡೋದು, ಕೆಲಸ ಮಾಡೋದು ಎಲ್ಲವೂ ಬೇಜಾರಾಗಿದೆ. ಒಂದ್ಸಲ ನನಗೆ ಚಾರ್ಮಾಡಿ ಘಾಟಿನಲ್ಲಿ ಒಂಟಿಯಾಗಿ ಅಡ್ಡಾಡುತ್ತ, ಬಸ್ಸುಗಳಿಗೆ ಅಡ್ಡಹಾಕಿ ಭಿಕ್ಷೆ ಕೇಳುತ್ತ ಬದುಕಿರೋಣ ಅನ್ನಿಸಿದೆ. ಹೇಗೂ ಅಲ್ಲಿ ನೀರಿದೆ. ದೇವಸ್ಥಾನ ಇದೆ. ಧರ್ಮಸ್ಥಳ,ಕೊಲ್ಲೂರು, ಶೃಂಗೇರಿ ಹೀಗೆ ಹೋಗ್ತಾ ಇರಬಹುದು.
`ಈಗ ನಿದ್ದೆ ಮಾಡು. ನಾನಿಲ್ವ? ಹೀಗೆ ನಾವಿಬ್ರೂ ಎಷ್ಟು ಸಲ ಪ್ರಯಾಣ ಮಾಡೋದಕ್ಕಾಗುತ್ತೆ? ನಿನ್ನನ್ನ ನಾನು ಎಷ್ಟು ಸಲ ನೋಡಿದ್ರೂ ನನ್ನ ಪುಟ್ಟ ಗೆಳತಿ ಅಂತಲೇ ಅನ್ಸುತ್ತೆ. ನಾನು ತುಂಬಾ ಭಾವನಾಜೀವಿ. ನನ್ನ ಕವನಗಳಲ್ಲಿ ಇರೋದೆಲ್ಲ ಬರೀ ಕನಸುಗಳು; ಅದರಲ್ಲಿ ನಾನೇ ತೇಲಿಹೋಗ್ತಾ ಇರ್‍ತೇನೆ. ಎಷ್ಟೋ ಸಲ ಅನಾಥ ಅಂತ ನನ್ನನ್ನೇ ನಾನು ಕರ್‍ಕೊಂಡಿದೇನೆ. ಬೆಂಗಳೂರಿಗೆ ಹೋದಮೇಲೆ ನನ್ನ ಕವನಗಳನ್ನು ಜೆರಾಕ್ಸ್ ಮಾಡಿಕೊಡ್ತೇನೆ, ಓದು. ನನ್ನ ಕತೆಯೆಲ್ಲ ಅದರಲ್ಲಿವೆ.
`ನೀನು ಇವತ್ತು ಬೆಳಗ್ಗೆ ಎಷ್ಟು ಚಲೋ ನಗ್ತಾ ಇದ್ದೆ… ಸಂಜೆ ನೋಡಿದ್ರೆ ಹಾಗೆ ಉಡುಗಿದೀಯ. ಯಾಕೆ ಮಾರಾಯ್ತಿ…. ಅವ ಬಿಟ್ರೆ ನಿನಗೆ ಬೇರೆ ಯಾರೂ ಸಿಗಲ್ವ? ಸುಮ್ನೆ ಯೋಚನೆ ಮಾಡ್ಬೇಡ. ಮಲಕ್ಕೋ. ನಾಳೆ ಮಾತಾಡಣ.’
ಹೀಗೇ ಏನೇನೋ ಮಾತನಾಡುತ್ತ ಅವಳನ್ನು ಹಾಗೇ ನೋಡುತ್ತಿದ್ದೆ. ಅವಳ ಕಣ್ಣಲ್ಲಿ ಎಂಥದೋ ನಿರಾಸಕ್ತಿ. ಅವಳಿಗೆ ನನ್ನ ಪ್ರೀತಿ-ಪ್ರೇಮದ ಕಥೆ ತಗೊಂಡು ಆಗಬೇಕಾದ್ದೇನೂ ಇಲ್ಲವಲ್ಲ…. ಹಾಗೇ ಅವಳ ನೆತ್ತಿ ತಟ್ಟುತ್ತ ಬಸ್ಸಿನ ಛಾವಣಿಯನ್ನೇ ನೋಡುತ್ತ ಮಲಗಿದೆ.
ಯಾವಾಗಲೋ ತುಮಕೂರು ದಾಟಿ ಬೆಂಗಳೂರಿಗೆ ಬಂದಿದ್ದೆವು. ಬೆಂಗಳೂರಿನ ಚಳಿಗೆ ನಾವು ನಡುಗತೊಡಗಿದೆವು. ಯಶವಂತಪುರ,ನವರಂಗ್ ದಾಟಿ ಮೆಜೆಸ್ಟಿಕ್ಕಿಗೆ ಬರೊ ಹೊತ್ತಿಗೆ ನಾವು ನಮ್ಮ ಲಗೇಜನ್ನು ಎತ್ತಿಕೊಂಡಿದ್ದೆವು.
ಸೀದಾ ಆಟೋ ಹಿಡಿದು ಚಾಮರಾಜಪೇಟೆಗೆ ಹೋದೆವು. ಅವಳನ್ನು ಹಾಸ್ಟೆಲಿಗೆ ಬಿಟ್ಟು ನಾನು ನನ್ನ ಕಾಯಕಕ್ಕೆ ಮರಳಿದೆ.
ಒಂದು ವಾರ ಕಳೆದಿತ್ತು. ಅವಳಿಂದ ಯಾವುದೇ ಫೋನ್ ಕೂಡಾ ಇಲ್ಲ. ನಾನೇನೂ ಹೆಚ್ಚು ಚಿಂತಿಸಲಿಲ್ಲ. ಬಸ್ಸಿನಲ್ಲಿ ಅವಳ ಜೊತೆ ಮಲಗಿದಾಗ ನನ್ನೊಳಗೆ ಎದ್ದ ಭಾವತುಮುಲಗಳು ಕಾಂಕ್ರೀಟಿನ ಗೋಡೆಗಳಲ್ಲಿ ಅಡಗಿಹೊಗಿದ್ದವು. ನಾನು ಅಲ್ಲಿ ಬಸ್‌ನಂಬರುಗಳ ನಡುವೆ, ಕ್ರಾಸುಗಳ ನಡುವೆ, ಮನೆ ಸಂಖ್ಯೆಗಳ ನಡುವೆ ಹೂತುಹೋಗಿದ್ದೆ. ನಾನು ಮತ್ತೆ ಕೆಲಸ ಬಿಟ್ಟೆ. ಈಗ ಶ್ರೀರಾಮಪುರದ ಐದನೇ ಕ್ರಾಸಿನ ವಾರಪತ್ರಿಕೆಯಲ್ಲಿ ರಸೀದಿ ಹರಿಯೋ ಕೆಲಸ.
ನನ್ನ ಆಫೀಸಿಗೆ ಫೋನ್ ಬಂದಾಗಲೇ ಅವಳ ನೆನಪಾಗಿದ್ದು. `ಬನ್ನಿ ಸರ್, ಅವಳು ಯಾಕೋ ತುಂಬಾ ಡಲ್ ಆಗಿದಾಳೆ. ತುಂಬಾ ಅಳ್ತಿದಾಳೆ. ಕೊನೆಗೆ ನಿಮ್ಮ ಫೋನ್ ನಂಬರ್ ಕೊಟ್ಳು. ಕೂಡ್ಲೇ ಬರ್‍ತೀರ ಸರ್?’ ಯಾರೋ ಅವಳ ಗೆಳತಿ ಕೇಳಿದಾಗ ನನಗೆ ಶಾಕ್ ಆಯ್ತು.
ಅಲ್ಲಿ ಹಾಸ್ಟೆಲಿನ ಜಗಲಿ ಕಟ್ಟೆಯ ಮೇಲೆ ಅವಳು ಕುಳಿತಿದ್ದಾಳೆ. ಯಾರನ್ನು ನೋಡುತ್ತಿದ್ದಾಳೆ ಎಂದು ಹೇಳಲು ಗೊತ್ತಾಗುತ್ತಿಲ್ಲ. ಒಮ್ಮೊಮ್ಮೆ ನನ್ನನ್ನು ನೋಡುತ್ತಾಳೆ. ಅವಳ ಗೆಳತಿಯರು ಒಂದು ಬದಿಯಲ್ಲಿ ಗುಸು ಗುಸು ಮಾತನಾಡಿಕೊಳ್ಳುತ್ತ ಕೂತಿದ್ದಾರೆ. ನಾನು ಅವಳ ಫ್ರೆಂಡ್ ಅಂತ್ಲೋ ಏನೋ, ಹತ್ತಿರ ಬಂದಿಲ್ಲ. ಸಂಜೆಯಾಗ್ತಾ ಇದೆ.
ನಾನು ಅವಳ ಅಂಗೈಯನ್ನು ಹಿಡಿದು ಸಮಾಧಾನ ಮಾಡೋದಕ್ಕೆ ಹೊರಟರೆ,ಮತ್ತೆ ಅವಳ ಕಣ್ಣಿನಿಂದ ನೀರು ಧುಮುಕುತ್ತಿದೆ. ಅವಳೇನೂ ನನ್ನ ಲವ್ ಮಾಡ್ತಿಲ್ಲ. ನಾನೂ ನನ್ನದೇ ಭಗ್ನಬದುಕಿನಲ್ಲಿ ಬಿದ್ದಿದ್ದೇನೆ. ಆದರೂ ಯಾಕೆ ಅವಳಿಗೆ ನಾನು ಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ.
`ಅವನು ಬೇರೆ ಮದುವೆಯಾಗಬಹುದಾ?’
ಅವನು ಬೇರೆ ಮದುವೆಯಾದರೆ ನೀನೂ ಬೇರೆ ಮದುವೆಯಾಗು ಎಂದು ಅವಳಿಗೆ ತಿಳಿಹೇಳುವಷ್ಟರಲ್ಲಿ ಎಂಟೂವರೆ ದಾಟಿತ್ತು.
ಮತ್ತೆ ಅವಳ ಫೋನ್ ಬರಲಿಲ್ಲ.
ಈಗ ನಾನು ಕನಿಂಗ್‌ಹ್ಯಾಮ್ ರಸ್ತೆಯಲ್ಲಿದ್ದೇನೆ. ಸ್ಕೂಟರ್ ಬಂದಿದೆ. ಹೆಂಡತಿ ಇದ್ದಾಳೆ. ಮಗ ಬೆಳೆದಿದ್ದಾನೆ. ಬೀದಿಗಳು ಧುತ್ತನೆ ಬೆಳೆದಿವೆ. ನಾನು ಈಟಿ ಯುಗದ ಹೊಸ ಕೆಲಸ ಸೇರಿದ್ದೇನೆ. ಅವಳಿಗೆ ಆಗಾಗ ಸಿಗುತ್ತಿದ್ದೆ. ಈಗಲೂ ಅವಳಿಗೆ ನನ್ನ ಮೊಬೈಲ್ ಸಂಖ್ಯೆ ಗೊತ್ತು.
ಅವಳ ಫೋನ್ ಬಂದಾಗ ನಾನು ಕೆಳಗೆ ಪಿಜ್ಜಾ ಮುಕ್ಕುತ್ತಿದ್ದೆ. `ಅವನ ಮನೆಗೆ ಹೋಗಬೇಕು ಅಂತ ಅನ್ನಿಸಿದೆ ಮಾರಾಯ’ ಎಂದಳು. ಮೊದಲು ಆಟೋದಲ್ಲೇ ಇಲ್ಲಿಗೆ ಬಾ, ಆಮೇಲೆ ಮಾತಾಡೋಣ ಎಂದೆ. ಅವನೂ ಬೆಂಗಳೂರಿನಲ್ಲೇ ಇದ್ದಾನೆ. ದೊಡ್ಡ ಆರ್ಕಿಟೆಕ್ಟ್.
ಅವಳ ಮುಖದಲ್ಲಿ ಏನೋ ದುಗುಡ. ಬಳ್ಳಾರಿಯಿಂದ ಬಸ್ಸಿನಲ್ಲಿ ಬಂದಾಗ ಇದ್ದ ಖಿನ್ನತೆಗೂ, ಇವತ್ತಿನದಕ್ಕೂ ತುಂಬಾ ವ್ಯತ್ಯಾಸವಿದೆ.
ಇಬ್ಬರೂ ಆಟೋದಲ್ಲೇ ಅವನ ಮನೆಗೆ ಹೋದೆವು. ಸುಮ್ಮನೆ ಯಾವುದೋ ಸಿನೆಮಾ ಹಾಕಿಕೊಂಡು ನೋಡ್ತಾ ಇದ್ದವನು ನಮ್ಮನ್ನು ನೋಡಿ ಹುಬ್ಬೇರಿಸಿದ. `ಅರೆ ಎಂಥ ಸರ್‌ಪ್ರೈಸ್’ ಎಂದ. ಕೂತುಕೊಳ್ಳಲು ಹೇಳಿ ಹಾಲು ತರಲು ಹೊರಗೆ ಹೋದ. ನಾವು ನಗು ಹಂಚಿಕೊಂಡೆವು. ಅವನಿನ್ನೂ ಮದುವೆಯಾಗಿಲ್ಲ. ಅವನಿಗೆ ವಯಸ್ಸಿನ ಪರಿವೆ ಇಲ್ಲ.
ಅವನೇ ಮಾಡಿದ ಚಾ ಕುಡಿದೆವು. ಮಾಡರ್ನ್ ಆರ್ಕಿಟೆಕ್ಚರ್ ಮಾರುಕಟ್ಟೆಯ ಬಗ್ಗೆ ಅವನು ಹೇಳಿದ ಡೈಲಾಗ್‌ಗಳಿಗೆ ಇವಳೂ ಒಂದಷ್ಟು ಪ್ರತಿಕ್ರಿಯೆ ನೀಡಿದಳು. ಹಾಗೇ ಅರ್ಧ ತಾಸು ಮಾತನಾಡಿ ಹೊರಬಿದ್ದೆವು.
ಆಟೋದಲ್ಲಿ ಕುಳಿತಾಗ ಅವಳ ಮುಖದಲ್ಲಿ ನಗು ಮಾಸಿರಲಿಲ್ಲ. ಯಾಕೆ ಅವಳು ನಗುತ್ತಿದ್ದಾಳೆ? ಅವನನ್ನು ಸೋಲಿಸಿದೆ ಎಂದೆ? ತಾನು ಮದುವೆಯಾಗಿ ಸುಖವಾಗಿದ್ದೇನೆ; ನೀನು ಮಾತ್ರ ಒಂಟಿಯಾಗಿದ್ದೀಯ ಅಂತಲೆ?
ನನ್ನ ಆಫೀಸಿನ ಎದುರು ಇಳಿದೆ. ಮತ್ತೆ ಅವಳ ಕೈ ಹಿಡಿದು ಹೇಳಿದೆ: ಚೆನ್ನಾಗಿರು ಮಾರಾಯ್ತಿ. ಅವನ ಭೇಟಿ ಆದ್ರೂ ಒಂದೆ; ಆಗದಿದ್ದರೂ ಒಂದೆ. ಈಗಂತೂ ಅವನನ್ನು ನೋಡಿದೀಯ. ಮುಂದೆ ಹಾಗೆ ಕೇಳಬೇಡ.
`ಆಯ್ತು ಕಣೋ. ತುಂಬಾ ಥ್ಯಾಂಕ್ಸ್. ನಾನೊಬ್ಳೇ ಖಂಡಿತ ಅವನ ಮನೆಗೆ ಹೋಗ್ತಿರಲಿಲ್ಲ. ಆದ್ರೆ ಎಷ್ಟೋ ವರ್ಷದಿಂದ ಕೊರೀತಾ ಇತ್ತು. ಅವನನ್ನು ಮಾತಾಡಿಸಬೇಕು ಅಂತ. ಇವತ್ತು ಸಮಾಧಾನ ಆಯ್ತು. ಅವನೇನೂ ನನಗೆ ಸೂಟ್ ಆಗ್ತಾ ಇರಲಿಲ್ಲ ಅಂತ ಕಾಣ್ಸುತ್ತೆ. ಅದಕ್ಕೇ ನಗು ಬಂತು.’
ಇವಳಿಗೆ ತನ್ನದೇ ಆದ ಆರ್ಗೂಮೆಂಟ್ ಬೇಕಿತ್ತು ಅನ್ನಿಸಿತು.
ಪಾರ್ಕಿಂಗ್ ಇಲ್ಲದ ಈ ಬೀದಿಯಲ್ಲಿ ಆಟೋ ನಿಲ್ಲಿಸುವುದೇ ಕಷ್ಟ. ಅವಳನ್ನು ಹಾಗೆ ಬೀದಿಯಲ್ಲಿ ಮಾತನಾಡಿಸಲು ನನಗೆ ಸಾಧ್ಯವಾಗಲಿಲ್ಲ. `ಸರಿ ಬೈ. ಮತ್ತೆ ಯಾವಾಗ್ಲಾದರೂ ಸಿಗು’ ಎಂದೆ.
`ನೀನು ನನ್ನ ಬೆಸ್ಟ್ ಫ್ರೆಂಡ್ ಮಾರಾಯ. ನನಗೆ ಡಿಪ್ರೆಸ್ ಆದಾಗ್ಲೆಲ್ಲ ನಿನಗೆ ಫೋನ್ ಮಾಡ್ತೀನಿ. ಪ್ಲೀಸ್ ಮಾತಾಡು’ ಎಂದಳು. ಇವರ ಮಾತು ನಿಲ್ಲೋದೇ ಇಲ್ಲ ಎಂದು ಗೊತ್ತಾಗಿಬಿಟ್ಟಂತೆ ಆಟೋ ಹೊರಟೇ ಬಿಟ್ಟಿತು.
ಇಲ್ಲಿಗೆ ಈ ಕಥೆ ಮುಗಿಯಿತು ಎಂದು ನಾನೂ ನೀವೂ ಅಂದುಕೊಂಡಿರುವ ಹಾಗೆಯೇ ಹತ್ತು ವರ್ಷಗಳು ಕಳೆದವು.
ಬಳ್ಳಾರಿಯ ಬಸ್ಸು, ಧೂಳು, ಚಳ್ಳಕೆರೆಯ ದಾಭಾ, ತುಮಕೂರಿನ ಟ್ರಾಫಿಕ್ ಜಾಮ್ ಎಲ್ಲವನ್ನೂ ನಾನು ಮರೆತಿದ್ದೆ. ಹಿರಿಯೂರುವರೆಗಿನ ರಸ್ತೆ ಹಾಗೇ ಇದ್ದರೂ ರಾಷ್ಟ್ರೀಯ ಹೆದ್ದಾರಿಯೀಗ ನಾಲ್ಕು ಪಥಗಳಾಗಿ ಬಿಡಿಸಿಕೊಂಡಿದೆ. ನಾನೂ ನಾಲ್ಕಾರು ಕೆಲಸಗಳನ್ನು ಮಾಡಿ, ನನ್ನ ಅನುಭವ ವಿಸ್ತಾರದ ನೆಪದಲ್ಲಿ ಬೆಂಗಳೂರಿನ ಹತ್ತಾರು ಕಂಪನಿಗಳಲ್ಲಿ ದುಡಿದೆ ; ಸೋಡೆಕ್ಸೋ ಪಾಸ್ ಹೊಡೆದು ಮಜಾ ಮಾಡಿದೆ. ಬಸ್ಸಿನ ಸುಖವನ್ನೇ ಮರೆತ ದರಿದ್ರ ಮನುಷ್ಯನಾದೆ; ಸ್ಕೂಟರಿನಿಂದ ಕಾರಿಗೆ ಜಿಗಿದೆ. ಇಂಟರ್‌ನೆಟ್, ಚಾಟ್ ಎಲ್ಲದಕ್ಕೂ ಪಕ್ಕಾದೆ. ಅವಳು ಎಲ್ಲಿದ್ದಾಳೆ, ಹೇಗಿದ್ದಾಳೆ ಅನ್ನೋದಿರಲಿ, ನನ್ನ ಪ್ರೀತಿಯ ಗೆಳೆಯರನ್ನೂ ಮರೆತು ಹಾಯಾಗಿ ಇರೋದಕ್ಕೆ ಆರಂಭಿಸಿದೆ.
`ಹಾಯ್, ಹ್ಯಾಗಿದೀಯ?’ ಎಂಬ ಒಂದು ಸಾಲಿನ ಪ್ರೈವೇಟ್ ಮೆಸೇಜ್ ನನ್ನ ಖಾಸಗಿ ಜಾಲತಾಣಕ್ಕೆ ಬಂದಾಗಲೇ ಅವಳೂ ಇಲ್ಲೆಲ್ಲೋ ಇದ್ದಾಳೆ ಎಂದು ಅಚ್ಚರಿಯಾಯ್ತು. ಪೋನ್ ಮಾಡಿದರೆ ಅಚ್ಚ ಬೆಂಗಳೂರು ಇಂಗ್ಲಿಶಿನಲ್ಲಿ ಹಾಯ್, ಹೂ ಈಸ್ ದಿಸ್ ಎಂದಳು. ನಾನೇ ಮಾರಾಯ್ತಿ ಎಂದು ನಸುನಕ್ಕಮೇಲೆ ಅವಳ ಭಾಷೆ ಬದಲಾಯ್ತು. ಅವನೆಲ್ಲಿದಾನೆ ಗೊತ್ತ ಅನ್ನೋದೇ ಮೊದಲ ಪ್ರಶ್ನೆ.
ಅವನೀಗ ಮದುವೆಯಾಗಿದಾನೆ ಎಂದೆ. ಅವನಿಗೆ ಒಬ್ಬ ಮಗಳಿದಾಳೆ. ಚಲೋ ಚೂಟಿ ಎಂದೆ. ಹೌದ ಎಂದು ಅಚ್ಚರಿಪಟ್ಟಳು. ಅವಳ ಹೆಸರು ಕೇಳಿದಳು.
`ಮೌನ’
`ಅದೇ ಹೆಸರು….. ಅದು ನಂದೇ ಪ್ರಪೋಸಲ್ ಕಣೋ…’ ಎಂದವಳೇ ಫೋನ್ ಕಟ್ ಮಾಡಿದಳು.
ಕಿಟಕಿಯ ಕರ್ಟನ್ ಸರಿಸಿ ನೋಡಿದೆ. ರಸ್ತೆಯಲ್ಲಿ ಭರ್ರೋ ಎಂದು ರಿಕ್ಷಾಗಳು, ಕಾರುಗಳು,ಸ್ಕೂಟರುಗಳು ಸಾಗುತ್ತಲೇ ಇದ್ದವು.
(ಕೃಪೆ: ಉಷಾಕಿರಣ)

ರಾಜ್ಯೋತ್ಸವ ರಸಪ್ರಶ್ನೆ -೨೦೦೦

ರಾಜ್ಯೋತ್ಸವ ರಸಪ್ರಶ್ನೆ -೨೦೦೦




(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ)
೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು?
(ಕ) ತಮಿಳು
(ಚ) ಇಂಗ್ಲಿಷ್
(ಟ) ಕಂಗ್ಲಿಷ್
(ತ) ಕನ್ನಡ
(ಪ) ಎಲ್ಲವೂ
೨. ಕರ್ನಾಟಕವನ್ನು ಆಳುತ್ತಿರುವವರು ಯಾರು?
(ಕ) ವೀರಪ್ಪನ್
(ಚ) ಮುಖ್ಯಮಂತ್ರಿ ಕೃಷ್ಣ
(ಟ) ಲಿಕ್ಕರ್ ಲಾಬಿ
(ತ) ಎಲ್ಲರೂ
(ಪ) ಯಾರೂ ಅಲ್ಲ
೩. ಬೆಂಗಳೂರನ್ನು ಈಗ ಆಳುತ್ತಿರುವವರು ಯಾರು?
(ಕ) ರಿಕ್ಷಾ ಚಾಲಕರು
(ಚ) ತಮಿಳರು
(ಟ) ಡಾ| ರಾಜ್ ಅಭಿಮಾನಿಗಳ ಸಂಘ
(ತ) ಎಲ್ಲರೂ
(ಪ) ಯಾರೂ ಅಲ್ಲ
೪. ಕನ್ನಡ ಚಲನಚಿತ್ರ ನಿರ್ದೇಶಕನಾಗಲು ಮುಖ್ಯ ಅರ್ಹತೆ ಏನು?
(ಕ) ಗಡ್ಡ ಬಿಟ್ಟಿರಬೇಕು
(ಚ) ತಮಿಳು, ತೆಲುಗು, ಹಿಂದಿ ಭಾಷೆ ಗೊತ್ತಿದ್ದು ಆ ಭಾಷೆಯ ಸಿನಿಮಾಗಳನ್ನು ದಿನಾ ನೋಡುತ್ತಿರಬೇಕು
(ಟ) ತಮಿಳು, ತೆಲುಗು, ಮಲಯಾಳಂ ಸಿನಿಮಾ ನಟಿಗಳ ಪರಿಚಯವಿರಬೇಕು
(ತ) ಎಲ್ಲವೂ
(ಪ) ಯಾವುದೂ ಅಲ್ಲ
೫. ಕರ್ನಾಟಕ ರಾಜ್ಯೋತ್ಸವ ಆಚರಿಸಲು ಮುಖ್ಯ ಕಾರಣ
(ಕ) ಸಾರ್ವಜನಿಕ ಗಣೇಶ ಚೌತಿಗೆ ಸಂಗ್ರಹಿಸಿ ಉಳಿದ ಹಣ ಮುಗಿಸಲು
(ಚ) ರಾಜ್ಯೋತ್ಸವ ಆಚರಣೆಯ ನೆವದಲ್ಲಿ ಮತ್ತಷ್ಟು ಹಣ ಸಂಗ್ರಹಿಸಲು
(ಟ) ಉಟ್ಟು ಓರಾಟಗಾರರಿಗೆ ಭಾಷಣ ಬಿಗಿಯಲು ವೇದಿಕೆ ಒದಗಿಸಲು
(ತ) ಎಲ್ಲವೂ
(ಪ) ಯಾವುದೂ ಅಲ್ಲ
೬. ಬೆಂಗಳೂರು ಕನ್ನಡಿಗರ ಮುಖ್ಯ ಲಕ್ಷಣ ಏನು?
(ಕ) ಮಾತು ಮಾತಿಗೆ “ಅಯ್ಯೋ ಅದೆಲ್ಲಾ ಆಗೋಲ್ಲಾರಿ” ಎನ್ನುತ್ತಿರುತ್ತಾರೆ
(ಚ) ಕನ್ನಡ ಶಬ್ದಗಳ ಜೊತೆ ಇಂಗ್ಲಿಷ್ ಶಬ್ದಗಳನ್ನು ಸೇರಿಸಿ ಮಾತನಾಡುತ್ತಾರೆ
(ಟ) ಇಂಗ್ಲಿಷ್ ಶಬ್ದಗಳ ಜೊತೆ ಕನ್ನಡ ಶಬ್ದಗಳನ್ನು ಸೇರಿಸಿ ಮಾತನಾಡುತ್ತಾರೆ
(ತ) ಎಲ್ಲವೂ
(ಪ) ಯಾವುದೂ ಅಲ್ಲ
೭. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕರ್ತವ್ಯಗಳು ಯಾವುವು?
(ಕ) ಕನ್ನಡ ಪರ ಸುತ್ತೋಲೆಗಳನ್ನು ಹೊರಡಿಸುವುದು
(ಚ) ಬೆಂಗಳೂರಿನಲ್ಲಿರುವ ಅಂಗಡಿಗಳ ಇಂಗ್ಲಿಷ್ ಫಲಕಗಳಿಗೆ ಟಾರು, ಸೆಗಣಿ ಬಳಿಯುವುದು
(ಟ) ಕಂಪೆನಿಗಳು ಉಪಯೋಗಿಸುತ್ತಿರುವ, ಇಂಗ್ಲಿಷ್ ಭಾಷೆಯಲ್ಲಿರುವ, ರಬ್ಬರ್ ಸ್ಟಾಂಪ್, ಲೆಟರ್ ಹೆಡ್‌ಗಳನ್ನು ಸಂಗ್ರಹಿಸುವುದು
(ತ) ಎಲ್ಲವೂ
(ಪ) ಯಾವುದೂ ಅಲ್ಲ
೮. ಕನ್ನಡದ ಖಾಸಗಿ ಟಿವಿ ಚ್ಯಾನಲುಗಳಲ್ಲಿ ಸುದ್ದಿ ಓದಲು, ಕಾರ್ಯಕ್ರಮ ನಡೆಸಿ ಕೊಡಲು, ಸಂದರ್ಶನ ಮಾಡಿಕೊಡಲು, ಇತ್ಯಾದಿಗಳಿಗೆ ಇರಬೇಕಾದ ಅರ್ಹತೆಗಳೇನು?
(ಕ) ಚ್ಯಾನೆಲ್‌ಗಳ ಒಡೆಯರಾದ ತಮಿಳರು, ಮಲೆಯಾಳಿಗರು, ತೆಲುಗರು ಇತ್ಯಾದಿ ಕನ್ನಡೇತರರ ಪರಿಚಯ ಇರತಕ್ಕದ್ದು
(ಚ) “ಆಸನ”ಕ್ಕೆ “ಹಾಸನ”, “ಆದರ”ಕ್ಕೆ “ಹಾದರ”, “ಹೋಗು”ಗೆ “ಓಗು” ಇತ್ಯಾದಿಯಾಗಿ ಖನ್ನಡ ಮಾತನಾಡಲು ಕಲಿತಿರಬೇಕು
(ಟ) ಕನ್ನಡ ಸಿನಿಮಾ ರಂಗದ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು -ಇವರ ಪರಿಚಯ ಇರಬೇಕು
(ತ) ಎಲ್ಲವೂ
(ಪ) ಯಾವುದೂ ಅಲ್ಲ
೯. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಕರ್ತವ್ಯಗಳೇನು?
(ಕ) ಮಂತ್ರಿಗಳ, ಅಧಿಕಾರಿಗಳ ಮಕ್ಕಳು, ಸಂಬಂಧಿಕರನ್ನು ಕಲಾವಿದರೆಂದು ವಿದೇಶಕ್ಕೆ ಕಳುಹಿಸಿಕೊಡುವುದು
(ಚ) ವಿಧಾನ ಸೌಧದಲ್ಲಿ ಡೊಳ್ಳು ಕುಣಿತ ಏರ್ಪಡಿಸುವುದು
(ಟ) ಲೆಟರ್‌ಹೆಡ್ ಸಂಘ ಸಂಸ್ಥೆಗಳಿಗೆ ಸರಕಾರದಿಂದ ಅನುದಾನ ನೀಡುವುದು
(ತ) ಮಂತ್ರಿವರೇಣ್ಯರ ಪ್ರಭಾವದಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಹಂಚುವುದು
(ಪ) ಎಲ್ಲವೂ
೧೦. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳೇನು?
(ಕ) ವರ್ಷಕ್ಕೊಮ್ಮೆ ಸಾಹಿತ್ಯ some ಮೇಳ ನಡೆಸುವುದು
(ಚ) ಸಮ್ಮೇಳನದ ಅಧ್ಯಕ್ಷರನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡುವುದು
(ಟ) ಸಾಹಿತಿಗಳಲ್ಲದವರನ್ನು ಪರಿಷತ್ತಿನ ಸದಸ್ಯರನ್ನಾಗಿ ನೋಂದಾಯಿಸುವುದು
(ತ) ಎಲ್ಲವೂ
(ಪ) ಯಾವುದೂ ಅಲ್ಲ
(೨೦೦೦ದಲ್ಲಿ ತಯಾರಿಸಿದ್ದು. ಈಗಲೂ ಪರಿಸ್ಥಿತಿಯಲ್ಲಿ ಏನೂ ಬದಲಾವಣೆಯಿಲ್ಲ)

Affiliate Marketing

Tips To Improve Your Affiliate Marketing Campaigns

Affiliate Marketing




There are so many tips and pieces of advice that will help you in affiliate marketing. The first step in article marketing is finding those tips and finding ways to incorporate them into your marketing plan. The following article was written to help you accomplish the first step in affiliate marketing.



When selecting an affiliate marketing program, look for a company that offers a unique product. If you are just one person in a sea of reviews for the same product, you are less likely to have a high number of buyers. Promoting a product that is unlike anything else on the market and is not being promoted by many others will have a higher rate of success.



Affiliate marketing opens the door for many people who are looking to start a home-based business. As long as you have the technical know-how, this is an ideal opportunity to make a living or supplement your income, depending on how much time you want to invest in the undertaking. Setting up a website promoting the products you are trying to sell is the first step, but don't stop there. Take advantage of email, blog forums, social networking sites and chat rooms to reach as wide an audience as possible. Write articles about the products, and post them on your own website to increase your traffic. Join one or many affiliate programs. One of the benefits from working at home is that it gives you the flexibility to choose your own hours. With some dedication and commitment, affiliate marketing can be a lucrative way to turn that spare room into an office.



Now that you have the advice and the tips that are necessary to be successful in your affiliate marketing venture, you should be ready to make the tips work for you. Anytime you go to make a move, check to see if there are tips in this article that will help you make the most out of that move.

UNIQUE TOURS & TRAVELS

UNIQUE 
TOURS  & TRAVELS

UNIQUE TOURS & TRAVELS

ತಾಯಿ ನನ್ನ ಜೀವನದ ಅತ್ಯಂತ ಪ್ರಮುಖ ವ್ಯಕ್ತಿ.ತಾಯಿ

ತಾಯಿ ನನ್ನ ಜೀವನದ ಅತ್ಯಂತ ಪ್ರಮುಖ ವ್ಯಕ್ತಿ.ತಾಯಿ ನಿಜವಾದ, ಅಗ್ರಗಣ್ಯ ಮತ್ತು ಬೆಸ್ಟ್ ಫ್ರೆಂಡ್ ಯಗಿರುತಾರೆ ಮತ್ತು ಅವರ ನೈಜ ಮೊದಲ ಮಾಡಬಹುದು,. ಈ ಜಗತ್ತಿನಲ್ಲಿ ನಮ್ಮ ತಾಯಿಯ ನಿಜವಾದ ಪ್ರೀತಿ ಮತ್ತು ಕಾಳಜಿಯನ್ನು ಹೋಲಿಕೆ ಮಾಡಳು ಸಾದ್ಯವಿಲ್ಲ. ಅವರು ನಮ್ಮ ಜೀವನದ ಏಕೈಕ ಪ್ರೀತಿಸುತ್ತಿರುವು ಮಹಿಳೆ, ತನ್ನ ಯಾವುದೇ ವೈಯಕ್ತಿಕ ಉದ್ದೇಶ ಇಲ್ಲದೆ ನಮಗೆ ಕಾಳಜಿ ತೋರಿಸುತಾರೆ. ಮಕ್ಕಳೆ ತಾಯಿಗೆ ಎಲ್ಲವೂ ಆಗಿದೆ. ಅವಳು ಯಾವಾಗಲೂ ಜೀವನದಲ್ಲಿ ಯಾವುದೇ ಕಷ್ಟಕರ  ಅಸಹಾಯಕ ಕೆಲಸಗಳನ್ನು ಮಡಲು ಆಗದೇ ಇರುವಾಗ  ನಮಗೆ ಪ್ರೋತ್ಸಾಹಿಸುತ್ತರೆ. ಅವರು ನಮಗೆ ಕೆಟ್ಟ ಮತ್ತು ಒಳ್ಳೆಯ ಮದ್ಯದಲಿ ಇರುವ ವ್ಯತ್ಯಾಸವನ್ನು ತಿಳಿಸಿ ಕೊಡುತಾರೆ. ಅವರು ನಿರ್ಬಂಧ ಮತ್ತು ಯಾವುದೇ ಮಿತಿಯನ್ನು ನಮಗೆ ಸೀಮಿತಗೊಳಿಸುವುದಿಲ್ಲ ಎಂದಿಗೂ. ಅವರು ನಮ್ಮ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲ್ಲಿ ಯಾವಾಗಲೂ ನಮ ಜೊತೆಯಲೇಇರುತಾರೆ. ಅವರು ಯಾವಾಗಲೂ ನಮನು ವಹಿಸುತಾ  ಅನಗತ್ಯವಾಗಿಂತ ಹೆಚ್ಚು ಪ್ರೀತಿಸುತ್ತಾರೆ.

ನಿಜವಾದ ಪ್ರೀತಿ ತಾಯಿಯ ಮತ್ತೊಂದು ಹೆಸರು. ನಾವು ತನ್ನ ಗರ್ಭದಲಿ ಬಂದ ಕಾಲಕ್ಕೆ,  ಅವರು ನಮಗೆ ದಣಿವಾಗದ  ಕಾಳಜಿ ಮತ್ತು ಪ್ರೀತಿ ನೀಡುತಾರೆ. ಆದ್ದರಿಂದ ನಾವು ದೇವರಿಗೆ ಕೃತಜ್ಞರಾಗಿರುವಂತೆ ಯಾವಾಗಲೂ ಯಾವ ಒಂದು ದೇವರ ಅನುಗ್ರಹವನ್ನು ಮಾಡಬಹುದು ತಾಯಿ ಹೆಚ್ಚು ಅಮೂಲ್ಯವಾಗಿದೆ. ಅವರು ನಿಜವಾದ ಪ್ರೀತಿ, ಕಾಳಜಿ ಮತ್ತು ತ್ಯಾಗ ಸಾಕಾರ ಆಗಿದೆ. ಅವರು ನಮಗೆ ಜನ್ಮ ನೀಡುವ ಮೂಲಕ ಒಂದು ಸಿಹಿ ಮನೆಯೊಳಗೆ ಮನೆ ತಿರುಗುತ್ತದೆ ಯಾರು ಒಂದಾಗಿದೆ. ತಾಯಿ ಗಿಂತ ಅಮೂಲ್ಯವಾದ ವಸ್ತು ಈ ಜಗತಿನಲ್ಲಿ  ಯಾವುದು ಇಲ್ಲ ಆದ್ದರಿಂದ ನಾವು ದೇವರಿಗೆ ಕೃತಜ್ಞರಾಗಿರಬೇಕು.ತಾಯಿಯು ದೇವರ ಅನುಗ್ರಹವನು ಪಡೆದಿದರೆ. ಅವರು ಮನೆಯಲ್ಲಿ ನಮ್ಮ ಮೊದಲ ಬಾರಿಗೆ ಶಾಲೆಯನ್ನು  ಆರಂಬಿಸುತಾರೆ  ಮತ್ತು ನಮ್ಮ ಜೀವನದಲ್ಲಿ  ಮೊದಲ ಮತ್ತು ಸುಂದರ ಶಿಕ್ಷಕಿ  ಆಗುತ್ತಾರೆ. ಅವರು ನಮಗೆ ವರ್ತನೆಯ ಮತ್ತು ಜೀವನದ ನಿಜವಾದ ಪಾಠ ತತ್ವಗಳನ್ನು ಕಲಿಸುತ್ತರೆ. ನಾವು ತನ್ನ ಗರ್ಭದಿಂದ ಹುಟ್ಟಿದ ಕಾಲದಿಂದ ತನ್ನ  ಜಿವ ಇರುವವರೆಗು ಪ್ರೀತಿ ಮತ್ತು ಕಾಳಜಿಯನು ನಿಡುತಾರೆ.ಅವರು ನೋವು ಮತ್ತು ಹೋರಾಟಗಳನ್ನು  ಸಾಕಷ್ಟು ಹೊಂದು ನಂತರ ನಮಗೆ ಜನ್ಮ ನೀಡುತ್ತದೆ ಆದರ ಪ್ರತಿಯಾಗಿ ಅವರು ಯಾವಾಗಲೂ ಪ್ರೀತಿ ನೀಡುತ್ತದೆ. ಈ ಪ್ರಪಂಚದಲ್ಲಿ ಯಾವುದೇ ಪ್ರೀತಿ ಬಲವಾದ, ಆದ್ದರಿಂದ ಶಾಶ್ವತವಾದ, ನಿಸ್ವಾರ್ಥ, ಶುದ್ಧ ಮತ್ತು ಭಕ್ತರ ಇಲ್ಲ. ಅವರು ಎಲ್ಲಾ ಕತ್ತಲೆ ತೆಗೆದು ನಮ್ಮ ಜೀವನದಲ್ಲಿ ದೀಪಗಳನ್ನು  ತೆರೆದಿಡುತ್ತರೆ. ಅವರು ನಮಗೆ ಯಾರಾದರೂ ಪೆಟ್ಟು ಮಾಡುವುದನು ಬಯಸುವುದಿಲ್ಲ ಮತ್ತು ಇತರರು ಮುಂದೆ ಚೆನ್ನಾಗಿ ವರ್ತಿಸಬೇಕು ಏಂಬ ಒಳೆತನವನು ನಮಗೆ ಕಲಿಸುತ್ತರೆ . ಗಮನ ಪಾವತಿ ಮತ್ತು ತಾಯಿ ಧನ್ಯವಾದ ಪಾವತಿಸುವ ಸಲುವಾಗಿ, ಮೇ 13 ತಾಯಿಯ ಡೇ ಎಂದು ಘೋಷಿಸಲ್ಪಟ್ಟಿದೆ ಮತ್ತು ಪ್ರತಿ ವರ್ಷ ಆಚರಿಸಲಾಗುತದೆ .ತಾಯಿಯ ಒಂದು ಪಾತ್ರವನ್ನು ಯಾರ ತುಂಬಿಸಲು ಸಾದ್ಯವಿಲ್ಲ ಆದರಿಂದ  ನಾವು ತುಂಬಾ ಯಾವಾಗಲೂ ಎಲ್ಲಾ ಜೀವನದ ಮೂಲಕ ನಮ್ಮ ತಾಯಿ ಆರೈಕೆಯನ್ನು ಮಾಡಬೇಕು. ಪ್ರತಿ ರಾತ್ರಿ ಅವರು ಪೌರಾಣಿಕ ಕಥೆಗಳು, ದೇವತೆಗಳಾದ ಮತ್ತು ರಾಜ ಮತ್ತು ರಾಣಿ ಇತರ ಐತಿಹಾಸಿಕ ಕಥೆಗಳ ಬಗ್ಗೆ ಕಥೆಗಳ ಬಗ್ಗೆ ತಿಳಿಸುತ್ತರೆ. ಅವರು ಯಾವಾಗಲೂ ನಮ್ಮ ಆರೋಗ್ಯ, ಶಿಕ್ಷಣ, ಮುಂದಿನ ಮತ್ತು ನಮ್ಮ ಸುರಕ್ಷತೆ ಇತರ ಅಪರಿಚಿತರಿಂದ ಬಗ್ಗೆ ಬಹಳ ಆಸಕ್ತಿ ಆಗುತ್ತರೆ . ಅವರು ಯಾವಾಗಲೂ ಜೀವನದಲ್ಲಿ ಸರಿಯಾದ ದಿಕ್ಕಿನಲ್ಲಿ ನಮಗೆ ದಾರಿ ಮತ್ತು ಅತ್ಯಂತ ಮುಖ್ಯವಾಗಿ ಅವರು ನಮ್ಮ ಜೀವನದಲ್ಲಿ ನಿಜವಾದ ಸಂತೋಷ ಹರಡುವಂತೆ ಮಾಡುತ್ತಾರೆ. ಅವರು  ಸಣ್ಣ ಮತ್ತು ಅಸಮರ್ಥ ಮಗುವನ್ನು ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ಮತ್ತು ಬೌದ್ಧಿಕವಾಗಿ ಎಂಬ ಬಲವಾದ ಮಾನವನಾಗಿ ಮಾಡುತ್ತರೆ. ಅವರು ಯಾವಾಗಲೂ ನಮ ಪರವಾಗಿ  ದೇವರಿಗೆ ಪ್ರಾರ್ಥನೆ ಮಾಡುತಾರೆ.  ನಾವು  ಆಕೆಯ ಆರೈಕೆಯನ್ನು ಮತ್ತು  ದುಃಖವನ್ನು ಅರ್ಥ ಮಾಡಿಕೊಂಡು  ಅವರನು  ಯಾವಾಗಲೂ ಸಂತೋಷದ ಇಡಬೇಕು.


🎼 ರೇಡಿಯೋ ದಿನ 2020 🎼


🎼 ರೇಡಿಯೋ ದಿನ 2020 🎼
=====================




World Radio Day

ಫೆಬ್ರವರಿ 13 "World Radio Day" ಎಂದು ಆಚರಣೆ. ಈಗ "NewsOnAir" App ಮೂಲಕ ಮೊಬೈಲ್ ಫೋನ್‌ನಲ್ಲಿ, ಮತ್ತು ಕಂಪ್ಯೂಟರ್‌ನಲ್ಲಿಯೂ, ರೇಡಿಯೋ ಕೇಳಬಹುದಾದ್ದರಿಂದ, ಈ Appನಲ್ಲೀಗ ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳ ನೇರಪ್ರಸಾರ ಕೇಳಲು ಸಿಗುತ್ತದಾದ್ದರಿಂದ, ನನ್ನಂಥ ರೇಡಿಯೋ ಪ್ರಿಯರಿಗೆ ಅನುದಿನವೂ ರೇಡಿಯೋ ದಿನವೇ.

ಆಕಾಶವಾಣಿಯ ಸಿಗ್ನೇಚರ್ ಟ್ಯೂನ್‌ನಿಂದ ಆರಂಭಿಸಿ, “ವಂದೇ ಮಾತರಂ" ಕೇಳಿಕೊಂಡು ಶುರುವಿಟ್ಟರೆ ಆಮೇಲೆ ಬೇರೆಬೇರೆ ನಿಲಯಗಳಿಂದ ಅದೂ-ಇದೂ ಬೇಕಾದ್ದನ್ನು a-la-carte ರೀತಿಯಲ್ಲಿ ಆಯ್ದುಕೊಂಡು ಆಲಿಸುತ್ತಲೇ ಇರಬಹುದು.

ಆಕಾಶವಾಣಿಯಿಂದ ನಾನು ಹೀರಿಕೊಳ್ಳುವ "ಡೈಲಿ ಡೋಸ್‌"ನಲ್ಲಿ ಏನೆಲ್ಲ ಇರುತ್ತದೆಂದು ಇಲ್ಲೊಂದು 10 ನಿಮಿಷಗಳ ಕ್ಯಾಪ್ಸೂಲ್ ಮಾಡಿಟ್ಟಿದ್ದೇನೆ. ಇದರಲ್ಲಿ

* ಅಮೃತವರ್ಷಿಣಿ- ಶಾಸ್ತ್ರೀಯ ಸಂಗೀತವಾಹಿನಿ
* ಮಂಗಳೂರು ಆಕಾಶವಾಣಿಯ ಪ್ರಭಾತಗೀತೆ
* ಬೆಂಗಳೂರು ಆಕಾಶವಾಣಿ ಎಫ್ ಎಂ ರೇನ್‌ಬೋ ಕನ್ನಡ ಕಾಮನಬಿಲ್ಲು
* ಸಂಗೀತಸರಿತಾ (ವಿವಿಧಭಾರತಿ)
* ಹಸಿರುಹೊನ್ನು (ಶೀರ್ಷಿಕೆಸಂಗೀತಕ್ಕಾಗಿ)
* ಮೈಸೂರು ಆಕಾಶವಾಣಿಯಿಂದ ಪದಸಂಸ್ಕೃತಿ
* ಪ್ರದೇಶಸಮಾಚಾರ
* ಧಾರವಾಡ ಆಕಾಶವಾಣಿಯಿಂದ ಕೃಷಿರಂಗ (“ಕರಿಯೆತ್ತ ಕಾಳಿಂಗ ಬಿಳಿಯೆತ್ತ ಮಾಲಿಂಗ..." ಶೀರ್ಷಿಕೆಸಂಗೀತಕ್ಕಾಗಿ)
* ಯುವವಾಣಿ
* ಜಯಮಾಲಾ (ವಿವಿಧಭಾರತಿ)

ಮುಂತಾದುವೆಲ್ಲವೂ ಬರುತ್ತವೆ. ಇವೆಲ್ಲವೂ ನನ್ನ ಪ್ರತಿದಿನವನ್ನೂ ಸಮೃದ್ಧವಾಗಿಸುತ್ತವೆ.

ನೀವು ಒಮ್ಮೆ ಈ ಆಡಿಯೊ ಪ್ಲೇ ಮಾಡಿ ಕೇಳಿ. ಹಾಗೆಯೇ "NewsOnAir" App ನೀವಿನ್ನೂ ನಿಮ್ಮ ಮೊಬೈಲ್‌ಫೋನ್‌ನಲ್ಲಿ ಸ್ಥಾಪಿಸಿಕೊಂಡಿಲ್ಲವಾದರೆ ಇಂದೇ download ಮಾಡಿಕೊಳ್ಳಿ. ಆಂಡ್ರಾಯ್ಡ್ ಫೋನ್‌ಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ, ಐಫೋನ್‌ಗಾದರೆ ಆ್ಯಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಸಿಗುತ್ತದೆ. "NewsOnAir" ಎಂದು ಹುಡುಕಿದರೆ ಸಿಗುತ್ತದೆ.

ಟಿವಿ ನೋಡುವುದಕ್ಕಿಂತ, ಅದರಲ್ಲೂ ಕೆಟ್ಟಕೊಳಕು ಸುದ್ದಿವಾಹಿನಿಗಳನ್ನು ನೋಡುತ್ತ ಕಾಲಹರಣ ಮಾಡುವುದಕ್ಕಿಂತ, ಆಕಾಶವಾಣಿಯ ಆಲಿಸುವಿಕೆ ಆರೋಗ್ಯಕ್ಕೆ ತುಂಬ ಒಳ್ಳೆಯದು!👌👏😀

- ಶ್ರೀವತ್ಸ ಜೋಶಿ. ವಾಷಿಂಗ್ಟನ್ ಡಿಸಿ.