WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Sunday, 28 March 2021

ಡಿ.ಕೆ ಶಿವಕುಮಾರ್, ಹೇಳಿದಂತೆ ಕೇಳಬೇಕು ಎಂದಿದ್ದಾರೆ: ಸಿ.ಡಿ ಯುವತಿಯ ಫೋನ್‌ ಆಡಿಯೋ ವೈರಲ್‌

ಬೆಂಗಳೂರು: ಮಾ.2ರಂದು ಸಿ.ಡಿ ಸ್ಫೋಟಗೊಂಡ ಬಳಿಕ ಯುವತಿ ಮತ್ತು ಸಹೋದರ ನಡುವೆ ನಡೆದಿರುವ ಫೋನ್‌ ಸಂಭಾಷಣೆಯ ಎರಡನೇ ಕ್ಲಿಪಿಂಗ್‌ ಬಹಿರಂಗವಾಗಿದೆ. ಹಣ ಕೊಟ್ಟು ಗೋವಾ ಬಸ್‌ ಹತ್ತಿಸಿದ್ದಾರೆ. ಡಿ.ಕೆ ಶಿವಕುಮಾರ್‌ ಹೇಳಿದಂತೆ ಕೇಳಬೇಕು ಎಂದಿದ್ದಾರೆ ಎಂದು ಯುವತಿ ಹೇಳಿರುವ 1 ನಿಮಿಷ 51 ಸೆಕೆಂಡುಗಳ ಆಡಿಯೊ ಬಹಿರಂಗವಾಗಿದೆ. ಸಂಭಾಷಣೆ ಹೀಗಿದೆ! ಸಹೋದರ: ಯಾವಾಗ ಬರುವೆ ಊರಿಗೆ.? ಯುವತಿ : ಬರುತ್ತೇನೆ. ನಾಲ್ಕೈದು ದಿನ ಆಗುತ್ತದೆ. ನನಗೆ ಈಗ ಹೋಗಬೇಡ. ನಾವು ಹೇಳಿದಂತೆ ಮಾಡು ಎಂದಿದ್ದಾರೆ. ಅದಕ್ಕೆ ಅವರು ಹೇಳಿದಂತೆ ಮಾಡಬೇಕು. ಸಹೋದರ: ಯಾರು ಹೇಳಿದಂತೆ ಮಾಡಬೇಕು? ಯುವತಿ: ಡಿ.ಕೆ ಶಿವಕುಮಾರ್‌. ಸಹೋದರ: ನಿಮಗೆ ಬಹಳ ಸಮಸ್ಯೆಯಾಗುತ್ತದೆ. ಯುವತಿ: ಏನೂ ಆಗುವುದಿಲ್ಲ. ಹೆದರಬೇಡ. ಪ್ಲೀಸ್‌ ನನ್ನನ್ನು ನಂಬು. ನಿನ್ನ ಕಾಲು ಬೀಳುತ್ತೇನೆ. ನೀನೊಬ್ಬನಾದರೂ ನನಗೆ ಸಂಪೋರ್ಟ್‌ ಮಾಡು. ಸಹೋದರ: ಏನು ನಂಬುವುದು? ಅಮೇಲೆ ನಿನ್ನ ಕೈ ಬಿಡುತ್ತಾರೆ. ಯುವತಿ: ಬಿಡಲ್ಲಾ, ಬಿಡಲ್ಲಾ. ಬಿಡುವಂತಿದ್ದರೆ ಇಲ್ಲಿವರೆಗೆ ಬಂದು ಮಾತನಾಡಿ ಹಣ ಕೊಟ್ಟು ನಮಗೆ ಬೇರೆ ಊರಿಗೆ ಕಳುಹಿಸಲು ಹೇಳುತ್ತಿರಲಿಲ್ಲ. ನಾವು ಬೆಂಗಳೂರಿನಲ್ಲಿಇರುವುದಿಲ್ಲ. ನಾನು ಮತ್ತು ಆಕಾಶ್‌ ಗೋವಾ ಹೋಗುತ್ತಿದ್ದೇವೆ. ಅಪ್ಪ, ಅಜ್ಜಿ ಯಾರಿಗೂ ಹೇಳಬೇಡ. ನಿನಗೊಬ್ಬನಿಗೆ ಗೊತ್ತಿರಲಿ. ನಿನ್ನ ಕಾಲು ಬೀಳುತ್ತೇನೆ. ಯಾರೂ ಕೇಳಿದರೂ ಗೊತ್ತಿಲ್ಲ. ಆಕೆಯ ಏರಿಯಾ ವಿಜಯ ನಗರ ಅಥವಾ ಸಂಜಯ್‌ ನಗರ ಎಂದು ಹೇಳು. ಆರ್‌.ಟಿ ನಗರ ಎಂದು ಹೇಳಬೇಡ. ಯುವತಿ: ಸರಿ. ಸದ್ಯಕ್ಕೆ ಈ ಸಿಮ್‌ಕಾರ್ಡ್‌ ತೆಗಿ. ಸಹೋದರ: ಎಲ್ಲವನ್ನು ತೆಗೆದು ನಮ್ಮ ಫೋನ್‌ ಕಸಿದುಕೊಂಡಿದ್ದಾರೆ. ನನಗೊಂದು ಬೇಸಿಕ್‌ ಸೆಟ್‌ ಕೊಡಿಸಿದ್ದಾರೆ. ಆಕಾಶನ ಫೋನ್‌ ಇದೆ. ಆತನ ಫೋನ್‌ ಟ್ರ್ಯಾಕ್‌ ಮಾಡಲು ಆಗುವುದಿಲ್ಲ. ನಮ್ಮ ಜೊತೆಗೆ ಇನ್ನು ಏಳೆಂಟು ಜನರಿದ್ದಾರೆ. ಏನು ಆಗುವುದಿಲ್ಲ. ಬಸ್‌ನಲ್ಲಿ ಕುಳಿತು ಮಾತನಾಡುತ್ತೇನೆ ಇರು.


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/39jDdJS
via IFTTT

No comments: